ಘರ್ಷಣೆ

ಹಸಿವೆ-ನೀರಡಿಕೆಯಲಿ
ಜೀವಂತ ಹೆಣವಾಗುತ
ವಂಚನೆಗೆ ಬಲಿಯಾಗಿ
ಬಳಲುತ… ಬಿದ್ದಿಹರು

ಜಾತಿ-ಧರ್ಮಗಳ-ಭೇದದಲಿ
ದ್ವೇಷ-ಬೆಸೆದು ಭಗ್ನಗೊಳಿಸುತ…
ಬಾಂಧವ್ಯದ ಹಸಿರು ಬಳ್ಳಿಯ
ಕಡಿದು ಬರಡುಗೊಳಿಸಿಹರು

ತಾಳ್ಮೆ-ನೋವುಂಡ ಜೀವಕ್ಕೆ
ಸಹನೆ-ಮೀರಿದ ಬದುಕಿಗೆ
ಕೊನೆ ಹೇಗಾದರೇನು…
ಮಿತಿ ಎಲ್ಲೆಂದು ಕೇಳರು

ಪ್ರೀತಿ-ವಾತ್ಸಲ್ಯಗಳ…
ನಾಚಿಕೆ ಕೋಟೆ ಬಿರಿದು
ಬಿರುಗಾಳಿ ಬೆಂಕಿಯುಗುಳುತ
ಶತ ಶತಮಾನವುಂಡ ದೌರ್ಜನ್ಯ-ನೋವು
ಕಟ್ಟಿಹಾಕಲು ಎದೆಸೆಟೆಸಿ ನಿಂತ ನಮ್ಮವರ

ನೋವಿನ ಕೂಗಿಗೆ ನಕ್ಸಲೈಟೆನ್ನುತ
ತುಳಿತದಿ ನೊಂದು ಮೇಲೇಳುವ ಬದುಕಿಗೆ
ಬೆಂಕಿಯಿಡುತ ಕೊಚ್ಚುವ
ರಕ್ತಾಸುರ… ಬೀಜಾಸುರರು… ನಾವು.

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲಿಗೆ ಆಯುಧ ಪೂಜೆ
Next post ಪ್ರತೀಕ್ಷೆ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys